ಘಂಟಾಮಠ
ಈ ಘಂಟಾಮಠವು ಪ್ರಧಾನ ಆಲಯಕ್ಕೆ ಅತಿ ಸಮೀಪದಲ್ಲಿ ಎಂದರೇ ದೇವಾಲಯದ ವಾಯವ್ಯ ದಿಶಯಲ್ಲಿ ಪ್ರಾಕಾರ ಗೋಡೆಯಿಂದ ಸುಮಾರು 100 ಮಿಟಾರುಗಳು ದೂರದಲ್ಲಿ ಇರುವದು. ಐದು-ಆರು ಚಿಕ್ಕ-ದೊಡ್ಡ ಆಲಯಗಳ ಸಮುದಾಯದಿಂದೊಡಗೂಡಿದ ಈ ಮಠವು ಎಷ್ಟೋ ಸಾರಿ ನಿರ್ಮಾಣದ ಸವರಣೆ ಮಾಡಿದಂತೆ ಪರಿಶೀಲನೆಯಲ್ಲಿ ಕಂಡುಬರುತ್ತಿದೆ.
ಶ್ರೀಶೈಲದಲ್ಲಿರುವ ಎಲ್ಲಮಠಗಳಿಗಿಂತ ಈ ಘಂಟಾಮಠವೇ ಅತಿ ಪ್ರಾಚೀನವಾದದ್ದು. ಈ ಮಠದ ಪ್ರಾಶಸ್ತಿ ಇಂಗ್ಲೀಷು ಶಕ.7ನೇ ಶತಾಬ್ದಿಯಿಂದಲೇ ತಿಳಿದುಬರುತ್ತಿದೆ. ಹರ್ಷನ “ರತ್ನಾವಳಿ” ನಾಟಕದಲ್ಲಿ ಹೇಳಲ್ಪಟ್ಟ ಶ್ರೀ ಘಂಟಾಸಿದ್ಧನು ಈ ಮಠದಲ್ಲಿಯೇ ಇರುತ್ತಿದ್ದನೆಂದು ಪ್ರತೀತಿ. ಇದರ ಪ್ರಕಾರ ಆಂಗ್ಲ ಶಕ 7ನೇ ಶತಾಬ್ದಿಯಲ್ಲಿಯೇ ಈ ಮಠ ಇರುವುದೇಂದು ಕಂಡುಬರುತ್ತದೆ.
ಈಗ ಈ ಮಠದಲ್ಲಿರುವ ಒಬ್ಬ ಸಿದ್ಧನ ಮೂರ್ತಿಯನ್ನು ಘಂಟಾಸಿದ್ಧೇಶ್ವರನೆಂದು ಕರೆಯುತ್ತಿರುವರು.
ಹೇಗಿರಲು ಘಂಟಾಮಠಕ್ಕೆ ಪಶ್ಚಿಮ-ನೈರ್ಋತಿಯಲ್ಲಿರುವ ವೀರಭಾದ್ರಾಲಯದ ದ್ವಾರಬಂಧನದ ಶಿಷ್ಯನೊಬ್ಬ ಮೇಲಿರುವ ಶಾಸನದಲ್ಲಿ ಮಲ್ಲಿಕಾರ್ಜುನಾಚಾರ್ಯರ
* ಶಿಷ್ಯನು ಶ್ರೀಶೈಲದಲ್ಲಿ ಘಂಟಾಸಿದ್ಧೇಶ್ವರನನ್ನು ಪ್ರತಿಷ್ಠೆಗೊಳಿಸಿರವನೆಂದು ಹೇಳಲ್ಪಟ್ಟಿದೆ. (ಇಂಡಿಯನ್ ಎಪಿಗ್ರಫೀ ವಾರ್ಷಿಕ ವಿವರಣೆ ಪತ್ರ 42/1915.) ಈ ಶಾಸನದಲ್ಲಿ ಹೇಳಲ್ಪಟ್ಟರುವ ಘಂಟಾಸಿದ್ಧೇಶ್ವರನು, ಘಂಟಾಮಠದಲ್ಲಿ ಈಗ ಕಂಡುಬರುತ್ತಿರುವ ಘಂಟಾಸಿದ್ಧೇಶ್ವರನು ಅವನೇ ಆಗಿರಬಹುದೆಂದು ತಿಳಿಯಬಹುದು.
* ಎರಡು ಪ್ರಸ್ತುತ ಘಂಟಾಮಠದಲ್ಲಿ ಪೂರ್ವಮುಖವಾಗಿ ಶಿವಾಲಯುಳಾದ ಮುಖವಾಗಿ ಒಂದು ಶಿವಾಲಯವು ಪಶ್ಚಿಮ ಮುಖವಾಗಿ ಒಂದು ಶಿವಾಲಯವು ಮತ್ತು ಕೌಮಾರಿ ದೇವಾಲಯವು ಇರುವವು. ಪೂರ್ವ ಮುಖವಾಗಿರುವ ಆಲಯವೇ ಈ ಮಠದಲ್ಲಿಯ ಪ್ರಧಾನ ಆಲಯ.
ಈ ಪ್ರಧಾನ ಆಲಯಕ್ಕೆ ಎಡಭಾಗದಲ್ಲಿ ಮತ್ತೊಂದು ಚಿಕ್ಕ ದೇವಾಲಯವು ಕೂಡಾ ಉಂಟು ಆದರೇ ಸಧ್ಯ ಈ ಆಲಯದಲ್ಲಿ ಯಾವ ದೇವರ ಮೂರ್ತಿಯೂ ಇರುವುದಿಲ್ಲ. ಇದು ಕೂಡಾ ಶಿವಾಲಯವೇ ಆಗಿರಬಹುದು. ಈ ಎಲ್ಲಾ ಆಲಯಗಳ ವಿಮಾನ ಗೋಪುರಗಳು ಕೂಡಾ ಮೆಟ್ಟೀಂಗಳ ರೂಪದಲ್ಲಿ ನಿರ್ಮಾಣಗೊಂಡಿರುವವು. ಇವೆಲ್ಲಾ ಕಲ್ಲಿನ ಕಟ್ಟಡಗಳೇ. ಈ ಮೆಟ್ಟಿಲಿನಂತಹ ಗೋಪುರ ಕಟ್ಟಡಗಳೆಲ್ಲಾ ಕೂಡಾ ಚಾಳುಕ್ಯರ ಕಾಲದ ದೇವಾಲಯಗಳಂತೆ ಕಂಡು ಬರುವವು.
ಆಂಗ್ಲ ಶಕ: 7-10 ಶತಾಬ್ದಿಗಳ ಮಧ್ಯ ಕಾಲದಲ್ಲಿ ನಿರ್ಮಾಣಗೊಂಡ ಆಲಯಗಳ ಮೆಟ್ಟಿಲುಗಳಂತಿಹ ವಿಮಾನಗೋಪುರಗಳನ್ನು ಕಾಣಬಹುದು. ಆದ್ದರಿಂದ ಘಂಟಾಮಠದಲ್ಲಿಯ ಈ ಆಲಯಗಳು ಕೂಡಾ ಆಂಗ್ಲ ಶಕ: 7-8 ಶತಾಬ್ದಿಯಲ್ಲಿ ನಿರ್ಮಾಣಗೊಂಡಿರುವುದಾಗಿ ಭಾವಿಸುವುದು ಸಹೇತುಕವೆನುಸುತ್ತದೆ.
ಈ ಆಲಯದ ಸಮುದಾಯಕ್ಕೆ ಉತ್ತರ ದಿಕ್ಕಿನಲ್ಲಿ ಪೂರ್ವ-ಈಶಾನ್ಯ ಭಾಗದಲ್ಲಿ ಪ್ರವೇಶ ದ್ವಾರ ಇರುವುದು. ಕಲ್ಲಿನಿಂದ ನಿರ್ಮಿಸಲ್ಲಟ್ಟ ಈ ಪ್ರವೇಶ ದ್ವಾರಕ್ಕೆ ಎರಡುಕಡೆ ದ್ವಾರ ಪಾಲಕರ ಮೂರ್ತಿಗಳು ಕೆತ್ತಲ್ವಟ್ಟಿವೆ. ಈ ಪ್ರವೇಶ ದ್ವಾರವು ಆಂಗ್ಲ ಶಕ 1314, ಆನಂದ ನಾಮ ಸಂವತ್ಸರ ಶ್ರಾವಣ ಶುದ್ದ ಪೌರ್ಣಮಿ (ಹುಣ್ನಿಮೆ) ದಿನದಂದು ಕಟ್ಟಿಸಿರುವುದಾಗಿ ಆಲಯದೊಳಗಿನ ಮಂಟಪದ ಮೇಲಿರುವ ಒಂದು ಶಾಸನದಿಂದ ತಿಳಿದು ಬರುತ್ತಿದೆ. ಘಂಟಾಮಠದೊಳಗಿನ ಪ್ರಧಾನ ಆಲಯವನ್ನು ಪರಿಶೋಧನೆ ಮಾಡಿದಾಗ ಮೊದಲು ಈ ಗುಡಿ ಗರ್ಭಾಲಯ, ಅಂತರಾಲಯ ಮುಖ್ಯ ಮಂಟಪಗಳನ್ನು ನಿರ್ಮಿಸಿದಂತೆ, ಬಹು ಕಾಲದ ನಂತರ ಮತ್ತೆ ಮುಖಮಂಟಪಕ್ಕೆ ಎದುರು ಎಂದರೆ ಪಶ್ಚಿಮ ದಿಕ್ಕಿನಲ್ಲಿ ಹೆಚ್ಚಿನ ಮತ್ತೊಂದು ಮಂಟಪವನ್ನು ನಿರ್ಮಿಸಲ್ಪಟ್ಟರುವುದಾಗಿ ತಿಳಿಯಬಹುದು.
ಅಂತರಾಲಯವನ್ನು ಅಂಟಿಕೊಂಡು ಮುಖಮಂಟಪವು 16 ಕಂಭಗಳಿಂದ ನಿರ್ಮಿಸಲ್ಪಟ್ಟರುವುದು. ಇದು ಹೇಗಿರಲು ಈ ಮುಖಮಂಟಪವನ್ನು ಹತ್ತಿಕೊಂಡು ತರುವಾಯ ಕಾಲದಲ್ಲಿ ನಿರ್ಮಿಸಿದ ಮಂಟಪವು 12 ಕಂಭಗಳಿಂದ ನಿರ್ಮಿಸಲಾಗಿರುವುದು. ಆದರೇ ಸಧ್ಯ 10 ಕಂಭಗಳು ಮಾತ್ರ ಇರುವುದು.
ಪ್ರಧಾನ ಆಲಯದೊಳಗಿನ ಶಿವಲಿಂಗಕ್ಕೆ ವ್ಯವಹಾರದಲ್ಲಿ ಯಾವ ಹೆಸರೂ ತಿಳಿದು ಬಂದಿರುವದಿಲ್ಲ. ಈ ಶಿವಲಿಂಗವು ಯಾವ ಸಮಯದಲ್ಲಿ ಪ್ರತಿಷ್ಠಿಸಲ್ಪಟ್ಟಿದೆಯೇ ಯಾವ ಆಧಾರಗಳು ಕೂಡಾ ಲಭಿಸಿರುವುದಿಲ್ಲ. ಆದರೆ ಆಲಯ ನಿರ್ಮಾಣದ ಸಮಯದಲ್ಲೇ ಎಂದರೇ ಆಂಗ್ಲ ಶಕ 7-8 ಶತಾಬ್ದಿಗಳಲ್ಲಿ ಈ ಶಿವಶಂಗವು ಪ್ರತಿಷ್ಠಿಸಿರಬಹುದು. ಈ ಶಿವಲಿಂಗದಲ್ಲಿ ಎಷ್ಟೋ ಪ್ರಾಚೀನತೆ ಕಂಡು ಬರುತ್ತಿರುವ ಈ ಊಹೆಗೆ ಬಲವನ್ನು ನೀಡುತ್ತಿದೆ.
ಇನ್ನು ಈ ಆಲಯದಲ್ಲಿ ಮುಖಮಂಟಪದೊಳಗಿನ ಕಂಭದ ಮೇಲ್ಭಾಗದಲ್ಲಿರುವ ಶಾಸನದ ಪ್ರಕಾರ ಮುಖಮಂಟಪವು ಆಂಗ್ಲಶಕ 1314 ನೇ ವರ್ಷದಲ್ಲಿ ಶ್ರೀ ಶಿವಯ್ಯ ಎಂಬ ಭಕ್ತನು ನಿರ್ಮಿಸಿ ಶ್ರೀ ಮಲ್ಲಿಕಾರ್ಜುಸ್ವಾಮಿಗೆ ದಾನಿವನಿತ್ತಂತೆ ತಿಳಿದುಬರುತ್ತಿದೆ. ಇನ್ನೂ ಶಾಸನದಲ್ಲಿ ಈ ಶಿವಯೃನವರು ಬ್ರಹ್ಮ, ವಿಷ್ಣು, ಮಹೇಶ್ವರರ ಮೂರ್ತಿಯ ಕೆತ್ತಿಸಿ ಈ ಮಂಟಪದಲ್ಲಿ ಪ್ರತಿಷ್ಠಿಸಿರುವನೆಂದು ಹೇಳಲ್ಪಟ್ಟಿದೆ. ಆದರೇ ಈ ಮಂಟಪದಲ್ಲಿ ಸಧ್ಯ ಈ ಮೂರ್ತಿಗಳಾವು ಕೂಡಾ ಇರುವದಿಲ್ಲ.
ಇನ್ನು ಈ ಮುಖ ಮಂಟಪವನ್ನು ಅಂಟಿಕೊಂಡು ತರುವಾಯ ಕಾಲದಲ್ಲಿ ನಿರ್ಮಿಸಿದ ಮಂಟಪಕ್ಕೆ ಉತ್ತರ ದಿಕ್ಕಿನಲ್ಲಿ ದಕ್ಷಿಟ ಮುಖವಾಗಿರುವ ಆಲಯದಲ್ಲಿ ಸಧ್ಯ ಒಂದು ಶಿವ ಲಿಂಗವು ಪೂಜೆಯನ್ನು ಗೈಯ್ಯುತ್ತಿದೆ. ಈ ಶಿವಲ್ಲಿಂಗಕ್ಕೆ ಯಾವ ಹೆಸರು ತಿಳಿದು ಬಂದಿಲ್ಲ. ಈ ಆಲಯ ಕೇವಲ ಗರ್ಭಾಲಯವನ್ನು ಮಾತ್ರ ತೊಡಗಿದೆ
ಈ ಶಿವಲಿಂಗಕ್ಕೆ ಹೆಸರು ಮಾತ್ರ ಏನೆಂಬುದು ತಿಳಿಯುದು. ಇಲ್ಲಿ ಕೇವಲ ಗರ್ಭಾಲಯವು ಮಾತ್ರ ಇರುವುದು.
ಪಶ್ಚಿಮ ದಿಕ್ಕಿನಲ್ಲಿ ಪೂರ್ವ ಮುಖವಾಗಿರುವ ಎರಡು ಆಲಯಗಳು ಗರ್ಭಾಲಯ ಮತ್ತು ಅಂತರಾಳಗಳಿಂದ ಕೂಡಿರುವುದು ಈ ಎರಡು ಆಲಯಗಳಲ್ಲಿ ಸಧ್ಯ ಶಿವಲಿಂಗಗಳಿಗೆ ನಿತ್ಯ ಪೂಜಾದಿಗಳು ನಡೆಯುತ್ತಿರಿವುದು.
ಈ ಆಲಯದಲ್ಲಿ ಬಲಗಡೆ ಇರುವ ದೇವರಿಗೆ ಘಂಟಾಸಿದ್ದೇಶ್ವರಲಿಂಗ ಎಂದು ಎನ್ನುವರು. ಎಡಕ್ಕಿರುವ ಆಲಯದಲ್ಲಿಯ ಸ್ವಾಮಿಯ ಹೆಸರು ಏನೆಂಬುದು ತಿಳಿಯದು. ಈ ಮಠ ಪ್ರಾಂಗಣದಲ್ಲಿ ಪೂರ್ವ ಮತ್ತು ಪಶ್ಚಿಮ ಆಲಯಗಳ ಮಧ್ಯಭಾಗದಲ್ಲಿ ಸ್ವಲ್ಪ ವಿಶಾಲವಾದ ಪ್ರದೇಶವಿರುವುದು.
ನೀರಿನ ಗುಂಡಗಳು:- ಘಂಟಾಮಠದ ಆವರಣದಲ್ಲಿ ಎರಡು ನೀರಿನ ಗುಂಡಗಳು ಇರುವವು. ಆಲಯ ಪ್ರಾಂಗಣದಲ್ಲಿ ಪೂರ್ವ ಮುಖವಾಗಿ ಎಡಭಾಗದಲ್ಲಿರುವ. ಆಲಯದ ಎದುರಿಗೆ ಇರುವ ಗುಂಡಕ್ಕೆ ಘಂಟಾಗುಂಡ ಎಂಬ ಹೆಸರು. ಗರ್ಭಾಲಯಕ್ಕೆ ಇದ್ದಂತೆಯೇ (ಪೂರ್ವ,ದಕ್ಷಿಣ, ಉತ್ತರ, ಭಾಗಗಳಲ್ಲಿ) ಮೂರು ದಿಕ್ಕಿಗೆ ಎತ್ತರದ ಗೋಡೆಗಳು ಮತ್ತು ಮೇಲಾಳಿಗೆಯಿಂದ ಇರುವ ಈ ಗುಂಡವು ಎಷ್ಟೋಮಹಿಮೆಯುಳ್ಳದೆಂದು ಪ್ರಸಿದ್ದಿಯಾಗಿದೆ.
ಸ್ಕಾಂದ ಪುರಾಣದಲ್ಲಿ ಶ್ರೀಶೈಲ ಖಂಡದಲ್ಲಿ ಈ ಘಂಟಾಗುಂಡವನ್ನು ಬಹಳಷ್ಟು ಸಾರಿ ಪ್ರಾಸ್ತಾಪಿಸಲಾಗಿದೆ. ಆಂಗ್ಲಶಕ 13ನೇ ಶತಾಬ್ದಿಯ ಕಾಲದ ನಿತ್ಯನಾಥಸಿದ್ದನು ತನ್ನ “ರಸರತ್ನಾ’ದಲ್ಲಿ ಅಷ್ಟಮೋಪ ದೇಶದೋಳು. ರಸಾಯನ ಖಂಡ ಎಂಬ ಹೆಸರಿನಿಂದ ಶ್ರೀಶೈಲ ಮಹಿಮೆಗಳನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಕೂಡಾ ಈ ಘಂಟಾಕುಂಡದ ಶ್ರೇಷ್ಠತೆಯನ್ನು ವಿವರಿಸುವನು, ಈ ಘಂಟಾಕುಂಡದಲ್ಲಿಯ ನೀರು ಯಾವಾಗಲೂ ಕಮ್ಮಿಯಾಗದಂತೆ ಇರುವುದು ವಿಶೇಷ.
ಈ ಘಂಟಾಕುಂಡವನ್ನು "ಅಮೃತ ಕುಂಡ" ಎಂಬ ಹೆಸರಿನಿಂದ ಕೂಡ ಕರೆಯುತ್ತಿರುವರು. ಈ ಘಂಟಾಕುಂಡಕ್ಕೆ ಪೂರ್ವ ದಿಕ್ಕಿಗೆ ಎಂದರೆ ಕುಂಡವನ್ನು ಅಂಟಿಕೊಂಡು ಹೊರಭಾಗದಲ್ಲಿ ಮತ್ತೊಂದು ಕೂಡಾ ಇರುವದು. ಈ ಕುಂಡಕ್ಕೆ ಸರಸ್ವತಿ ಗುಂಡ ಎಂದು ಕರೆಯುತ್ತಿರುವರು. ಈ ಗುಂಡದಲ್ಲಿ ಕೂಡ ನೀರು ಸದಾ ಇರುತ್ತದೆ.
ಘಂಟಾಮಠ-ದೇವತಾ ಮೂರ್ತಿಗಳು.
ಕುಮಾರಸ್ವಾಮಿ;- ಘಂಟಾಮಠದ ಪ್ರಾಂಗಣದಲ್ಲಿ ದಕ್ಷಿಣ ದಿಕ್ಕಿಗೆ ಎಂದರೆ ಅಮೃತ ಗುಂಡದ ಎದುರಿಗೆ ಎಡಭಾಗದಲ್ಲಿ ಆರು ಮುಖಗಳುಳ್ಳ ಕುಮಾರಸ್ವಾಮಿ ದರ್ಶನ ಕೊಡುತ್ತಿರುವನು.
ಬಹಳ ಸುಂದರವಾಗಿ ಕಾಣಿಸುವ ಈ ಸ್ವಾಮಿ ವಿಗ್ರಹವು ಪ್ರಾಚಿನ ವಿಗ್ರಹದಂತೆ ಕಂಡುಬರುವುದು ಆದರೆ ಈ ದೇವರಿಗೆ ಈ ಪ್ರಾಂಗಣದಲ್ಲಿ ಪತ್ಯೇಕವಾಗಿ ಆಲಯವು ಇರುವುದಿಲ್ಲ, ಇಲ್ಲಿ ಪೂರ್ವದಿಂದಲೇ ಕುಮಾರಸ್ವಾಮಿ ಪೂಜಾದಿಗಳನ್ನು ಗೈಯುತ್ತಿರುವನೆಂದು ಸ್ತಾನಿಕರು ಹೇಳುತ್ತಿರುವರು.
ವೇದಿಕೆಯ ಮೇಲೆ ಅರ್ಧಾಸನ ಭಂಗಿಮದಲ್ಲಿ ಕುಳಿತು ಈ ಕುಮಾರಸ್ವಾಮಿ ಪೀಠದ ಮೇಲೆ ಎಡಗಾಲು ಮಡಚಿ ಬಲಗಾಲು ಕೆಳಗೆ ಚಾಚಿಕೊಂಡು ಇರುವನು. ಪೀಠದ ಮೇಲೆ ಎಂದರೆ ತನ್ನ ವಾಹನವಾದ ನವಿಲು ಸರ್ಪವನ್ನು ಬಾಯಲ್ಲಿ ಹಿಡಿದುಕೊಂಡು ಇರುವುದು.ತನ್ನ ಆರು ಶಿರಸ್ಸುಗಳಲ್ಲಿ ಕೂಡಾ ಕಿರೀಟಗಳು ಧರಿಸಿರುವ ಈ ಸ್ವಾಮಿಯು ತನ್ನ ಹನ್ನೆರಡು ಕೈಗಳಲ್ಲಿ ಬಲಗಡೆ ಕೆಳಗಿಂದ ಮೇಲಕ್ಕೆ ಕ್ರಮವಾಗಿ ಅಕ್ಷರಮಾಲ, ಬಾಣ, ಖಡ್ಗ, ಚಕ್ರ, ಪಾಶ, ತ್ರಿಶೂಲವನ್ನು ಧರಿಸಿರಲು ಎಡಗಡೆ ಕಮಂಡಲ, ಧನಸ್ಸು, ಢಾಲು, ಶಂಖ, ಸರ್ಪ, ಡಮರುಗವನ್ನು ಹಿಡಿದಿರುವನು. ವಸ್ತ್ರಾಲಂಕೃತನಾದ ಶ್ರೀ ಸ್ವಾಮಿಗೆ ಕರ್ಣಾಭರಣಗಳು, ಕಂಠಾಭರಣಗಳು ಕೂಡಾ ಇರುವವು.
ಈ ಕುಮಾರಸ್ವಾಮಿ ವಿಗ್ರಹವು ರೂಪದಲ್ಲಿಯೂ ವiತ್ತು ಆಯುಧ ಧಾರಣೆಯಲ್ಲಿಯೂ ಕೂಡಾ ಶ್ರೀಶೈಲ ಪ್ರಧಾನ ಆಲಯ ಪ್ರಾಂಗಣದಲ್ಲಿರುವ ಕುಮಾರಸ್ವಾಮಿ ವಿಗ್ರಹವನ್ನು ಪೂರ್ತಿ ಓಲಿದೆ. ಇದು ವಿಶೇಷವೇನಿಸುತ್ತದೆ. ಆದರೇ ಪರಿಮಾಣದಲ್ಲಿ ಮಾತ್ರ ಎರಡು ವಿಗ್ರಹಗಳಿಗೆ ಸ್ವಲ್ಪ ವ್ಯತ್ಯಾಸವಿರುತ್ತದೆ.
ಹೀಗಿರಲು ಪ್ರಧಾನ ಆಲಯ ಪ್ರಾಂಗಣದಲ್ಲಿ ನವಬ್ರಹ್ಮ ಆಲಯಗಳ ಪಕ್ಕದಲ್ಲಿ ಕೊನೆಯದಾಗಿ ಈ ಕುಮಾರಸ್ವಾಮಿ ಆಲಯವಿರುವುದು. ಈ ಗುಡಿಯು ಚಾಳುಕ್ಯರ ಕಾಲದಲ್ಲಿ ಎಂದರೆ ಸುಮಾರು ಆಂಗ್ಲ ಶಕ 7-8ರ ಶತಾಬ್ಧಯಲ್ಲಿ ನಿರ್ಮಿಸಿದಂತೆ ಭಾವಿಸಲಾಗಿದೆ. ಕಾರಣ ಘಂಟಾಮಠದದಲ್ಲಿಯ ಕುಮಾರಸ್ವಾಮಿ ವಿಗ್ರಹ ಕೂಡಾ ಇಂಚು ಮಿಂಚು ಆಂಗ್ಲ ಶಕ:-7-8 ರ ಶತಾಬ್ಧಿಯಲ್ಲಿಯ ಕಾಲದ್ದಾಗಿ ಊಹಿಸಬಹುದು.
ಕೌಮಾರಿ
ಘಂಟಾಮಠದ ಪ್ರಾಂಗಣದಲ್ಲಿ ಪ್ರಧಾನ ಆಲಯಕ್ಕೆ ದಕ್ಷಿಣ ದಿಕ್ಕಿನಲ್ಲಿ ಒಂದು ಚಿಕ್ಕ ಮಂದಿರ (ಗುಡಿ) ಇರುವದು ಈ ಮಂದಿರದಲ್ಲಿ ಆರು ಮುಖಗಳುಳ್ಳ (ಮುಂದೆ ಮೂರು-ಹಿಂದೆ ಮೂರು ಮುಖಗಳು) ಅಮ್ಮನವರು ದರ್ಶನವನ್ನು ಕೊಡುತ್ತಿರುವಳು. ಸ್ಥಾನಿಕರು ಈ ಅಮ್ಮನವರನ್ನು ಗಾಯತ್ರಿದೇವಿ ಎಂದು ಭಾವಿಸುವರು. ಆದರೇ ಸತ್ಯವಾಗಿ ಆಕೆಯು ಸಪ್ತಮಾತೃಕೆಯರಲ್ಲಿ ಒಬ್ಬಳಾದ ಕೌಮದಿ ದೇವಿ.
ಬ್ರಾಹ್ಮಿಮಾಹೇಶ್ವರಿ,ಕೌಮಾರಿ,ವೈಷ್ಣವಿ,ವಾರಾಹಿ,ಇಂದ್ರಾಣಿ,ಚಾಮುಂಡಾದೇವಿಯವರನ್ನು ಸಪ್ತಮಾತೃಕೆಯರೆಂದು ಕರೆಯುತ್ತಾರೆ. ಸಾಧಾರಣವಾಗಿ ಈ ಸಪ್ತ ಮಾತೃಕೆಯರ ವಿಗ್ರಹಗಳು ಒಂದೇ ಸಾಲಾಗಿ ಕುಳಿತಂತೆ ಕೆತ್ತಲ್ಪಟ್ಟಿರುತ್ತದೆ. ಬಿಡಿಯಾಗಿ ಎಲ್ಲಿಯೂ ಕಾಣುವುದಿಲ್ಲ.
ಆದರೆ ಶ್ರೀಶೈಲ ಕ್ಷೇತ್ರದಲ್ಲಿ-ಕೌಮಾರಿ ದೇವಿ ಪ್ರತ್ಯೇಕವಾಗಿ (ಬಿಡಿಯಾಗಿ) ಇರುವದು ವಿಶೇಷವೆನಿಸುತ್ತದೆ. ಈ ವಿಗ್ರಹವನ್ನು ಬಹುವಿಶೇಷ ರೂಪವೆಂದು ಹೇಳಬಹುದು. ಕೌಮಾರಿದೇವಿ ಈ ರೀತಿ ಬಿಡಿಯಾಗಿ ಮತ್ತೆಲ್ಲಿಯೂ ಕೂಡಾ ಇದ್ದಂತೆ ತಿಳಿದು ಬಂದಿರುವುದಿಲ್ಲ, ಕಾರಣ ಈ ವಿಶೇಷವನ್ನು ಶ್ರೀಶೈಲ ಕ್ಷೇತ್ರಕ್ಕೆ ಮಾತ್ರವೆಂದು ಪ್ರತ್ಯೇಕವಾಗಿ ಹೇಳಬಹುದು.
ಹೀಗಿರಲು ವಸ್ತ್ರಾಲಂಕರಣದಿಂದ ಪೀಠದ ಮೇಲೆ ಆಸೀನಳಾದ ನವಿಲುವಾಹನದಿಂದ ಕಾಣುವ ಈ ದೇವಿ ಅರ್ಧಾಸನ ಭಂಗಿಮದಲ್ಲಿ ಎಡಗಾಲು ಮಡಚಿಕೊಂಡು ಸರ್ಪವನ್ನು ಬಾಯಲ್ಲಿ ಹಿಡಿದ ನವಿಲು ಮೇಲೆ ಬಲಗಾಲು ಇಟ್ಟಿರುವುದನ್ನು ಕಾಣಬಹುದು, ಈ ಅಮ್ಮನವರು ಕೇಶ ಬಂಧನದಿಂದ ಕೂಡಿದ ಶಿರಸ್ಸುಗಳುಳ್ಳ ಆರುಮುಖಗಳಿಂದ ಕಾಣುವಳು.
ಅಮ್ಮನವರು ತನ್ನ ಹನ್ನೆರಡು ಕೈಗಳಿಂದ ಬಲಗಡೆ ಕೆಳಗಿಂದ ಮೇಲಕ್ಕೆ ಕ್ರಮವಾಗಿ ಜಪಮಾಲಯುತ ಚಿನ್ನುದ್ರಾಶೂಲ, ಪರಶುವು, ಖಡ್ಗ, ಬಾಣ, ಶಕ್ತಿ, ಆಯುಧವನ್ನು ಹಾಗೆಯೇ ಎಡಭಾಗದ ಭುಜಗಳಲ್ಲಿ ತಾಳಪತ್ರಯುತ ವರಮುದ್ರೆ, ತ್ರಿಶೂಲ, ಅಂಕುಶ, ಡಾಲು, ಧನಸ್ಸು, ಶಕ್ತಿ, ಆಯುಧಗಳನ್ನು ಧರಿಸಿರುವಳು. ಅಮ್ಮನವರಿಗೆ ಕರ್ಣಾಭರಣಗಳು ವಿವಿಧ ಕಂಠಾಭರಣಗಳನ್ನು ಧರಿಸಿರುವುದನ್ನು ಕಾಣಬಹುದು. ಈ ಅಮ್ಮನವರನ್ನು ಘಂಟಾಮಠದಲ್ಲಿ ಎಂದು ಪ್ರತಿಷ್ಠಿಸಿರುವರೋ ಇಂದಿಗೂ ತಿಳಿಯದು.
ಬಹುಮಹಿಮೆಯುಳ್ಳ ಈ ಮೂರ್ತಿಭಕ್ತರು ಅರಿಕೆಗಳನ್ನು ತೀರಿಸುವಳೆಂದು ಭಕ್ತರ ನಂಬಿಕೆ. ಅದಕ್ಕಾಗಿಯೇ ಸದಾ ಎಲ್ಲ ರಾಷ್ಟ್ರಗಳಿಂದ ಭಕ್ತರು ಬಂದು ದೀಕ್ಷೆಯಿಂದ ಈ ಅಮ್ಮನವರನ್ನು ಉಪಾಸನೆಯಿಂದ ಪೂಜಿಸಿ, ಆರಾಧಿಸಿ, ತಮ್ಮ ತಮ್ಮ ಬನೋಬಯಕೆಗಳನ್ನು ಈಡೇರಿಸಿಕೋಳ್ಳುತ್ತಿರುವರು.
ಇನ್ನೂ ಕೆಲವರು ಮಾನಸಿಕ ಪ್ರಶಾಂತತೆಗಾಗಿ ಮತ್ತು ಆರೋಗ್ಯಕ್ಕಾಗಿ ಅಮ್ಮನವರನ್ನು ಧ್ಯಾನಿಸುತ್ತಿರುವರು. ಈ ಘಂಟಾಮಠವು ಹಿಂದಿನ ಕಾಲದಲ್ಲಿ ಸಿದ್ಧಪುರುಷರ ವಾಸಸ್ಥಾನವೆಂದು ಅದಕ್ಕೇ ಈ ಮಠದದಲ್ಲಿ ಮಾಡುವ, ಧ್ಯಾನ, ಜಪ, ಪಾರಾಯಣಗಳು ಬೇಗ ಸಿದ್ಧಸುವವೆಂದು ಭಕ್ತರ ನಂಬಿಕೆ.
ಶ್ರೀಶೈಲದಲ್ಲಿರುವ ಎಲ್ಲಮಠಗಳಿಗಿಂತ ಈ ಘಂಟಾಮಠವೇ ಅತಿ ಪ್ರಾಚೀನವಾದದ್ದು. ಈ ಮಠದ ಪ್ರಾಶಸ್ತಿ ಇಂಗ್ಲೀಷು ಶಕ.7ನೇ ಶತಾಬ್ದಿಯಿಂದಲೇ ತಿಳಿದುಬರುತ್ತಿದೆ. ಹರ್ಷನ “ರತ್ನಾವಳಿ” ನಾಟಕದಲ್ಲಿ ಹೇಳಲ್ಪಟ್ಟ ಶ್ರೀ ಘಂಟಾಸಿದ್ಧನು ಈ ಮಠದಲ್ಲಿಯೇ ಇರುತ್ತಿದ್ದನೆಂದು ಪ್ರತೀತಿ. ಇದರ ಪ್ರಕಾರ ಆಂಗ್ಲ ಶಕ 7ನೇ ಶತಾಬ್ದಿಯಲ್ಲಿಯೇ ಈ ಮಠ ಇರುವುದೇಂದು ಕಂಡುಬರುತ್ತದೆ.
ಈಗ ಈ ಮಠದಲ್ಲಿರುವ ಒಬ್ಬ ಸಿದ್ಧನ ಮೂರ್ತಿಯನ್ನು ಘಂಟಾಸಿದ್ಧೇಶ್ವರನೆಂದು ಕರೆಯುತ್ತಿರುವರು.
ಹೇಗಿರಲು ಘಂಟಾಮಠಕ್ಕೆ ಪಶ್ಚಿಮ-ನೈರ್ಋತಿಯಲ್ಲಿರುವ ವೀರಭಾದ್ರಾಲಯದ ದ್ವಾರಬಂಧನದ ಶಿಷ್ಯನೊಬ್ಬ ಮೇಲಿರುವ ಶಾಸನದಲ್ಲಿ ಮಲ್ಲಿಕಾರ್ಜುನಾಚಾರ್ಯರ
* ಶಿಷ್ಯನು ಶ್ರೀಶೈಲದಲ್ಲಿ ಘಂಟಾಸಿದ್ಧೇಶ್ವರನನ್ನು ಪ್ರತಿಷ್ಠೆಗೊಳಿಸಿರವನೆಂದು ಹೇಳಲ್ಪಟ್ಟಿದೆ. (ಇಂಡಿಯನ್ ಎಪಿಗ್ರಫೀ ವಾರ್ಷಿಕ ವಿವರಣೆ ಪತ್ರ 42/1915.) ಈ ಶಾಸನದಲ್ಲಿ ಹೇಳಲ್ಪಟ್ಟರುವ ಘಂಟಾಸಿದ್ಧೇಶ್ವರನು, ಘಂಟಾಮಠದಲ್ಲಿ ಈಗ ಕಂಡುಬರುತ್ತಿರುವ ಘಂಟಾಸಿದ್ಧೇಶ್ವರನು ಅವನೇ ಆಗಿರಬಹುದೆಂದು ತಿಳಿಯಬಹುದು.
* ಎರಡು ಪ್ರಸ್ತುತ ಘಂಟಾಮಠದಲ್ಲಿ ಪೂರ್ವಮುಖವಾಗಿ ಶಿವಾಲಯುಳಾದ ಮುಖವಾಗಿ ಒಂದು ಶಿವಾಲಯವು ಪಶ್ಚಿಮ ಮುಖವಾಗಿ ಒಂದು ಶಿವಾಲಯವು ಮತ್ತು ಕೌಮಾರಿ ದೇವಾಲಯವು ಇರುವವು. ಪೂರ್ವ ಮುಖವಾಗಿರುವ ಆಲಯವೇ ಈ ಮಠದಲ್ಲಿಯ ಪ್ರಧಾನ ಆಲಯ.
ಈ ಪ್ರಧಾನ ಆಲಯಕ್ಕೆ ಎಡಭಾಗದಲ್ಲಿ ಮತ್ತೊಂದು ಚಿಕ್ಕ ದೇವಾಲಯವು ಕೂಡಾ ಉಂಟು ಆದರೇ ಸಧ್ಯ ಈ ಆಲಯದಲ್ಲಿ ಯಾವ ದೇವರ ಮೂರ್ತಿಯೂ ಇರುವುದಿಲ್ಲ. ಇದು ಕೂಡಾ ಶಿವಾಲಯವೇ ಆಗಿರಬಹುದು. ಈ ಎಲ್ಲಾ ಆಲಯಗಳ ವಿಮಾನ ಗೋಪುರಗಳು ಕೂಡಾ ಮೆಟ್ಟೀಂಗಳ ರೂಪದಲ್ಲಿ ನಿರ್ಮಾಣಗೊಂಡಿರುವವು. ಇವೆಲ್ಲಾ ಕಲ್ಲಿನ ಕಟ್ಟಡಗಳೇ. ಈ ಮೆಟ್ಟಿಲಿನಂತಹ ಗೋಪುರ ಕಟ್ಟಡಗಳೆಲ್ಲಾ ಕೂಡಾ ಚಾಳುಕ್ಯರ ಕಾಲದ ದೇವಾಲಯಗಳಂತೆ ಕಂಡು ಬರುವವು.
ಆಂಗ್ಲ ಶಕ: 7-10 ಶತಾಬ್ದಿಗಳ ಮಧ್ಯ ಕಾಲದಲ್ಲಿ ನಿರ್ಮಾಣಗೊಂಡ ಆಲಯಗಳ ಮೆಟ್ಟಿಲುಗಳಂತಿಹ ವಿಮಾನಗೋಪುರಗಳನ್ನು ಕಾಣಬಹುದು. ಆದ್ದರಿಂದ ಘಂಟಾಮಠದಲ್ಲಿಯ ಈ ಆಲಯಗಳು ಕೂಡಾ ಆಂಗ್ಲ ಶಕ: 7-8 ಶತಾಬ್ದಿಯಲ್ಲಿ ನಿರ್ಮಾಣಗೊಂಡಿರುವುದಾಗಿ ಭಾವಿಸುವುದು ಸಹೇತುಕವೆನುಸುತ್ತದೆ.
ಈ ಆಲಯದ ಸಮುದಾಯಕ್ಕೆ ಉತ್ತರ ದಿಕ್ಕಿನಲ್ಲಿ ಪೂರ್ವ-ಈಶಾನ್ಯ ಭಾಗದಲ್ಲಿ ಪ್ರವೇಶ ದ್ವಾರ ಇರುವುದು. ಕಲ್ಲಿನಿಂದ ನಿರ್ಮಿಸಲ್ಲಟ್ಟ ಈ ಪ್ರವೇಶ ದ್ವಾರಕ್ಕೆ ಎರಡುಕಡೆ ದ್ವಾರ ಪಾಲಕರ ಮೂರ್ತಿಗಳು ಕೆತ್ತಲ್ವಟ್ಟಿವೆ. ಈ ಪ್ರವೇಶ ದ್ವಾರವು ಆಂಗ್ಲ ಶಕ 1314, ಆನಂದ ನಾಮ ಸಂವತ್ಸರ ಶ್ರಾವಣ ಶುದ್ದ ಪೌರ್ಣಮಿ (ಹುಣ್ನಿಮೆ) ದಿನದಂದು ಕಟ್ಟಿಸಿರುವುದಾಗಿ ಆಲಯದೊಳಗಿನ ಮಂಟಪದ ಮೇಲಿರುವ ಒಂದು ಶಾಸನದಿಂದ ತಿಳಿದು ಬರುತ್ತಿದೆ. ಘಂಟಾಮಠದೊಳಗಿನ ಪ್ರಧಾನ ಆಲಯವನ್ನು ಪರಿಶೋಧನೆ ಮಾಡಿದಾಗ ಮೊದಲು ಈ ಗುಡಿ ಗರ್ಭಾಲಯ, ಅಂತರಾಲಯ ಮುಖ್ಯ ಮಂಟಪಗಳನ್ನು ನಿರ್ಮಿಸಿದಂತೆ, ಬಹು ಕಾಲದ ನಂತರ ಮತ್ತೆ ಮುಖಮಂಟಪಕ್ಕೆ ಎದುರು ಎಂದರೆ ಪಶ್ಚಿಮ ದಿಕ್ಕಿನಲ್ಲಿ ಹೆಚ್ಚಿನ ಮತ್ತೊಂದು ಮಂಟಪವನ್ನು ನಿರ್ಮಿಸಲ್ಪಟ್ಟರುವುದಾಗಿ ತಿಳಿಯಬಹುದು.
ಅಂತರಾಲಯವನ್ನು ಅಂಟಿಕೊಂಡು ಮುಖಮಂಟಪವು 16 ಕಂಭಗಳಿಂದ ನಿರ್ಮಿಸಲ್ಪಟ್ಟರುವುದು. ಇದು ಹೇಗಿರಲು ಈ ಮುಖಮಂಟಪವನ್ನು ಹತ್ತಿಕೊಂಡು ತರುವಾಯ ಕಾಲದಲ್ಲಿ ನಿರ್ಮಿಸಿದ ಮಂಟಪವು 12 ಕಂಭಗಳಿಂದ ನಿರ್ಮಿಸಲಾಗಿರುವುದು. ಆದರೇ ಸಧ್ಯ 10 ಕಂಭಗಳು ಮಾತ್ರ ಇರುವುದು.
ಪ್ರಧಾನ ಆಲಯದೊಳಗಿನ ಶಿವಲಿಂಗಕ್ಕೆ ವ್ಯವಹಾರದಲ್ಲಿ ಯಾವ ಹೆಸರೂ ತಿಳಿದು ಬಂದಿರುವದಿಲ್ಲ. ಈ ಶಿವಲಿಂಗವು ಯಾವ ಸಮಯದಲ್ಲಿ ಪ್ರತಿಷ್ಠಿಸಲ್ಪಟ್ಟಿದೆಯೇ ಯಾವ ಆಧಾರಗಳು ಕೂಡಾ ಲಭಿಸಿರುವುದಿಲ್ಲ. ಆದರೆ ಆಲಯ ನಿರ್ಮಾಣದ ಸಮಯದಲ್ಲೇ ಎಂದರೇ ಆಂಗ್ಲ ಶಕ 7-8 ಶತಾಬ್ದಿಗಳಲ್ಲಿ ಈ ಶಿವಶಂಗವು ಪ್ರತಿಷ್ಠಿಸಿರಬಹುದು. ಈ ಶಿವಲಿಂಗದಲ್ಲಿ ಎಷ್ಟೋ ಪ್ರಾಚೀನತೆ ಕಂಡು ಬರುತ್ತಿರುವ ಈ ಊಹೆಗೆ ಬಲವನ್ನು ನೀಡುತ್ತಿದೆ.
ಇನ್ನು ಈ ಆಲಯದಲ್ಲಿ ಮುಖಮಂಟಪದೊಳಗಿನ ಕಂಭದ ಮೇಲ್ಭಾಗದಲ್ಲಿರುವ ಶಾಸನದ ಪ್ರಕಾರ ಮುಖಮಂಟಪವು ಆಂಗ್ಲಶಕ 1314 ನೇ ವರ್ಷದಲ್ಲಿ ಶ್ರೀ ಶಿವಯ್ಯ ಎಂಬ ಭಕ್ತನು ನಿರ್ಮಿಸಿ ಶ್ರೀ ಮಲ್ಲಿಕಾರ್ಜುಸ್ವಾಮಿಗೆ ದಾನಿವನಿತ್ತಂತೆ ತಿಳಿದುಬರುತ್ತಿದೆ. ಇನ್ನೂ ಶಾಸನದಲ್ಲಿ ಈ ಶಿವಯೃನವರು ಬ್ರಹ್ಮ, ವಿಷ್ಣು, ಮಹೇಶ್ವರರ ಮೂರ್ತಿಯ ಕೆತ್ತಿಸಿ ಈ ಮಂಟಪದಲ್ಲಿ ಪ್ರತಿಷ್ಠಿಸಿರುವನೆಂದು ಹೇಳಲ್ಪಟ್ಟಿದೆ. ಆದರೇ ಈ ಮಂಟಪದಲ್ಲಿ ಸಧ್ಯ ಈ ಮೂರ್ತಿಗಳಾವು ಕೂಡಾ ಇರುವದಿಲ್ಲ.
ಇನ್ನು ಈ ಮುಖ ಮಂಟಪವನ್ನು ಅಂಟಿಕೊಂಡು ತರುವಾಯ ಕಾಲದಲ್ಲಿ ನಿರ್ಮಿಸಿದ ಮಂಟಪಕ್ಕೆ ಉತ್ತರ ದಿಕ್ಕಿನಲ್ಲಿ ದಕ್ಷಿಟ ಮುಖವಾಗಿರುವ ಆಲಯದಲ್ಲಿ ಸಧ್ಯ ಒಂದು ಶಿವ ಲಿಂಗವು ಪೂಜೆಯನ್ನು ಗೈಯ್ಯುತ್ತಿದೆ. ಈ ಶಿವಲ್ಲಿಂಗಕ್ಕೆ ಯಾವ ಹೆಸರು ತಿಳಿದು ಬಂದಿಲ್ಲ. ಈ ಆಲಯ ಕೇವಲ ಗರ್ಭಾಲಯವನ್ನು ಮಾತ್ರ ತೊಡಗಿದೆ
ಈ ಶಿವಲಿಂಗಕ್ಕೆ ಹೆಸರು ಮಾತ್ರ ಏನೆಂಬುದು ತಿಳಿಯುದು. ಇಲ್ಲಿ ಕೇವಲ ಗರ್ಭಾಲಯವು ಮಾತ್ರ ಇರುವುದು.
ಪಶ್ಚಿಮ ದಿಕ್ಕಿನಲ್ಲಿ ಪೂರ್ವ ಮುಖವಾಗಿರುವ ಎರಡು ಆಲಯಗಳು ಗರ್ಭಾಲಯ ಮತ್ತು ಅಂತರಾಳಗಳಿಂದ ಕೂಡಿರುವುದು ಈ ಎರಡು ಆಲಯಗಳಲ್ಲಿ ಸಧ್ಯ ಶಿವಲಿಂಗಗಳಿಗೆ ನಿತ್ಯ ಪೂಜಾದಿಗಳು ನಡೆಯುತ್ತಿರಿವುದು.
ಈ ಆಲಯದಲ್ಲಿ ಬಲಗಡೆ ಇರುವ ದೇವರಿಗೆ ಘಂಟಾಸಿದ್ದೇಶ್ವರಲಿಂಗ ಎಂದು ಎನ್ನುವರು. ಎಡಕ್ಕಿರುವ ಆಲಯದಲ್ಲಿಯ ಸ್ವಾಮಿಯ ಹೆಸರು ಏನೆಂಬುದು ತಿಳಿಯದು. ಈ ಮಠ ಪ್ರಾಂಗಣದಲ್ಲಿ ಪೂರ್ವ ಮತ್ತು ಪಶ್ಚಿಮ ಆಲಯಗಳ ಮಧ್ಯಭಾಗದಲ್ಲಿ ಸ್ವಲ್ಪ ವಿಶಾಲವಾದ ಪ್ರದೇಶವಿರುವುದು.
ನೀರಿನ ಗುಂಡಗಳು:- ಘಂಟಾಮಠದ ಆವರಣದಲ್ಲಿ ಎರಡು ನೀರಿನ ಗುಂಡಗಳು ಇರುವವು. ಆಲಯ ಪ್ರಾಂಗಣದಲ್ಲಿ ಪೂರ್ವ ಮುಖವಾಗಿ ಎಡಭಾಗದಲ್ಲಿರುವ. ಆಲಯದ ಎದುರಿಗೆ ಇರುವ ಗುಂಡಕ್ಕೆ ಘಂಟಾಗುಂಡ ಎಂಬ ಹೆಸರು. ಗರ್ಭಾಲಯಕ್ಕೆ ಇದ್ದಂತೆಯೇ (ಪೂರ್ವ,ದಕ್ಷಿಣ, ಉತ್ತರ, ಭಾಗಗಳಲ್ಲಿ) ಮೂರು ದಿಕ್ಕಿಗೆ ಎತ್ತರದ ಗೋಡೆಗಳು ಮತ್ತು ಮೇಲಾಳಿಗೆಯಿಂದ ಇರುವ ಈ ಗುಂಡವು ಎಷ್ಟೋಮಹಿಮೆಯುಳ್ಳದೆಂದು ಪ್ರಸಿದ್ದಿಯಾಗಿದೆ.
ಸ್ಕಾಂದ ಪುರಾಣದಲ್ಲಿ ಶ್ರೀಶೈಲ ಖಂಡದಲ್ಲಿ ಈ ಘಂಟಾಗುಂಡವನ್ನು ಬಹಳಷ್ಟು ಸಾರಿ ಪ್ರಾಸ್ತಾಪಿಸಲಾಗಿದೆ. ಆಂಗ್ಲಶಕ 13ನೇ ಶತಾಬ್ದಿಯ ಕಾಲದ ನಿತ್ಯನಾಥಸಿದ್ದನು ತನ್ನ “ರಸರತ್ನಾ’ದಲ್ಲಿ ಅಷ್ಟಮೋಪ ದೇಶದೋಳು. ರಸಾಯನ ಖಂಡ ಎಂಬ ಹೆಸರಿನಿಂದ ಶ್ರೀಶೈಲ ಮಹಿಮೆಗಳನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಕೂಡಾ ಈ ಘಂಟಾಕುಂಡದ ಶ್ರೇಷ್ಠತೆಯನ್ನು ವಿವರಿಸುವನು, ಈ ಘಂಟಾಕುಂಡದಲ್ಲಿಯ ನೀರು ಯಾವಾಗಲೂ ಕಮ್ಮಿಯಾಗದಂತೆ ಇರುವುದು ವಿಶೇಷ.
ಈ ಘಂಟಾಕುಂಡವನ್ನು "ಅಮೃತ ಕುಂಡ" ಎಂಬ ಹೆಸರಿನಿಂದ ಕೂಡ ಕರೆಯುತ್ತಿರುವರು. ಈ ಘಂಟಾಕುಂಡಕ್ಕೆ ಪೂರ್ವ ದಿಕ್ಕಿಗೆ ಎಂದರೆ ಕುಂಡವನ್ನು ಅಂಟಿಕೊಂಡು ಹೊರಭಾಗದಲ್ಲಿ ಮತ್ತೊಂದು ಕೂಡಾ ಇರುವದು. ಈ ಕುಂಡಕ್ಕೆ ಸರಸ್ವತಿ ಗುಂಡ ಎಂದು ಕರೆಯುತ್ತಿರುವರು. ಈ ಗುಂಡದಲ್ಲಿ ಕೂಡ ನೀರು ಸದಾ ಇರುತ್ತದೆ.
ಘಂಟಾಮಠ-ದೇವತಾ ಮೂರ್ತಿಗಳು.
ಕುಮಾರಸ್ವಾಮಿ;- ಘಂಟಾಮಠದ ಪ್ರಾಂಗಣದಲ್ಲಿ ದಕ್ಷಿಣ ದಿಕ್ಕಿಗೆ ಎಂದರೆ ಅಮೃತ ಗುಂಡದ ಎದುರಿಗೆ ಎಡಭಾಗದಲ್ಲಿ ಆರು ಮುಖಗಳುಳ್ಳ ಕುಮಾರಸ್ವಾಮಿ ದರ್ಶನ ಕೊಡುತ್ತಿರುವನು.
ಬಹಳ ಸುಂದರವಾಗಿ ಕಾಣಿಸುವ ಈ ಸ್ವಾಮಿ ವಿಗ್ರಹವು ಪ್ರಾಚಿನ ವಿಗ್ರಹದಂತೆ ಕಂಡುಬರುವುದು ಆದರೆ ಈ ದೇವರಿಗೆ ಈ ಪ್ರಾಂಗಣದಲ್ಲಿ ಪತ್ಯೇಕವಾಗಿ ಆಲಯವು ಇರುವುದಿಲ್ಲ, ಇಲ್ಲಿ ಪೂರ್ವದಿಂದಲೇ ಕುಮಾರಸ್ವಾಮಿ ಪೂಜಾದಿಗಳನ್ನು ಗೈಯುತ್ತಿರುವನೆಂದು ಸ್ತಾನಿಕರು ಹೇಳುತ್ತಿರುವರು.
ವೇದಿಕೆಯ ಮೇಲೆ ಅರ್ಧಾಸನ ಭಂಗಿಮದಲ್ಲಿ ಕುಳಿತು ಈ ಕುಮಾರಸ್ವಾಮಿ ಪೀಠದ ಮೇಲೆ ಎಡಗಾಲು ಮಡಚಿ ಬಲಗಾಲು ಕೆಳಗೆ ಚಾಚಿಕೊಂಡು ಇರುವನು. ಪೀಠದ ಮೇಲೆ ಎಂದರೆ ತನ್ನ ವಾಹನವಾದ ನವಿಲು ಸರ್ಪವನ್ನು ಬಾಯಲ್ಲಿ ಹಿಡಿದುಕೊಂಡು ಇರುವುದು.ತನ್ನ ಆರು ಶಿರಸ್ಸುಗಳಲ್ಲಿ ಕೂಡಾ ಕಿರೀಟಗಳು ಧರಿಸಿರುವ ಈ ಸ್ವಾಮಿಯು ತನ್ನ ಹನ್ನೆರಡು ಕೈಗಳಲ್ಲಿ ಬಲಗಡೆ ಕೆಳಗಿಂದ ಮೇಲಕ್ಕೆ ಕ್ರಮವಾಗಿ ಅಕ್ಷರಮಾಲ, ಬಾಣ, ಖಡ್ಗ, ಚಕ್ರ, ಪಾಶ, ತ್ರಿಶೂಲವನ್ನು ಧರಿಸಿರಲು ಎಡಗಡೆ ಕಮಂಡಲ, ಧನಸ್ಸು, ಢಾಲು, ಶಂಖ, ಸರ್ಪ, ಡಮರುಗವನ್ನು ಹಿಡಿದಿರುವನು. ವಸ್ತ್ರಾಲಂಕೃತನಾದ ಶ್ರೀ ಸ್ವಾಮಿಗೆ ಕರ್ಣಾಭರಣಗಳು, ಕಂಠಾಭರಣಗಳು ಕೂಡಾ ಇರುವವು.
ಈ ಕುಮಾರಸ್ವಾಮಿ ವಿಗ್ರಹವು ರೂಪದಲ್ಲಿಯೂ ವiತ್ತು ಆಯುಧ ಧಾರಣೆಯಲ್ಲಿಯೂ ಕೂಡಾ ಶ್ರೀಶೈಲ ಪ್ರಧಾನ ಆಲಯ ಪ್ರಾಂಗಣದಲ್ಲಿರುವ ಕುಮಾರಸ್ವಾಮಿ ವಿಗ್ರಹವನ್ನು ಪೂರ್ತಿ ಓಲಿದೆ. ಇದು ವಿಶೇಷವೇನಿಸುತ್ತದೆ. ಆದರೇ ಪರಿಮಾಣದಲ್ಲಿ ಮಾತ್ರ ಎರಡು ವಿಗ್ರಹಗಳಿಗೆ ಸ್ವಲ್ಪ ವ್ಯತ್ಯಾಸವಿರುತ್ತದೆ.
ಹೀಗಿರಲು ಪ್ರಧಾನ ಆಲಯ ಪ್ರಾಂಗಣದಲ್ಲಿ ನವಬ್ರಹ್ಮ ಆಲಯಗಳ ಪಕ್ಕದಲ್ಲಿ ಕೊನೆಯದಾಗಿ ಈ ಕುಮಾರಸ್ವಾಮಿ ಆಲಯವಿರುವುದು. ಈ ಗುಡಿಯು ಚಾಳುಕ್ಯರ ಕಾಲದಲ್ಲಿ ಎಂದರೆ ಸುಮಾರು ಆಂಗ್ಲ ಶಕ 7-8ರ ಶತಾಬ್ಧಯಲ್ಲಿ ನಿರ್ಮಿಸಿದಂತೆ ಭಾವಿಸಲಾಗಿದೆ. ಕಾರಣ ಘಂಟಾಮಠದದಲ್ಲಿಯ ಕುಮಾರಸ್ವಾಮಿ ವಿಗ್ರಹ ಕೂಡಾ ಇಂಚು ಮಿಂಚು ಆಂಗ್ಲ ಶಕ:-7-8 ರ ಶತಾಬ್ಧಿಯಲ್ಲಿಯ ಕಾಲದ್ದಾಗಿ ಊಹಿಸಬಹುದು.
ಕೌಮಾರಿ
ಘಂಟಾಮಠದ ಪ್ರಾಂಗಣದಲ್ಲಿ ಪ್ರಧಾನ ಆಲಯಕ್ಕೆ ದಕ್ಷಿಣ ದಿಕ್ಕಿನಲ್ಲಿ ಒಂದು ಚಿಕ್ಕ ಮಂದಿರ (ಗುಡಿ) ಇರುವದು ಈ ಮಂದಿರದಲ್ಲಿ ಆರು ಮುಖಗಳುಳ್ಳ (ಮುಂದೆ ಮೂರು-ಹಿಂದೆ ಮೂರು ಮುಖಗಳು) ಅಮ್ಮನವರು ದರ್ಶನವನ್ನು ಕೊಡುತ್ತಿರುವಳು. ಸ್ಥಾನಿಕರು ಈ ಅಮ್ಮನವರನ್ನು ಗಾಯತ್ರಿದೇವಿ ಎಂದು ಭಾವಿಸುವರು. ಆದರೇ ಸತ್ಯವಾಗಿ ಆಕೆಯು ಸಪ್ತಮಾತೃಕೆಯರಲ್ಲಿ ಒಬ್ಬಳಾದ ಕೌಮದಿ ದೇವಿ.
ಬ್ರಾಹ್ಮಿಮಾಹೇಶ್ವರಿ,ಕೌಮಾರಿ,ವೈಷ್ಣವಿ,ವಾರಾಹಿ,ಇಂದ್ರಾಣಿ,ಚಾಮುಂಡಾದೇವಿಯವರನ್ನು ಸಪ್ತಮಾತೃಕೆಯರೆಂದು ಕರೆಯುತ್ತಾರೆ. ಸಾಧಾರಣವಾಗಿ ಈ ಸಪ್ತ ಮಾತೃಕೆಯರ ವಿಗ್ರಹಗಳು ಒಂದೇ ಸಾಲಾಗಿ ಕುಳಿತಂತೆ ಕೆತ್ತಲ್ಪಟ್ಟಿರುತ್ತದೆ. ಬಿಡಿಯಾಗಿ ಎಲ್ಲಿಯೂ ಕಾಣುವುದಿಲ್ಲ.
ಆದರೆ ಶ್ರೀಶೈಲ ಕ್ಷೇತ್ರದಲ್ಲಿ-ಕೌಮಾರಿ ದೇವಿ ಪ್ರತ್ಯೇಕವಾಗಿ (ಬಿಡಿಯಾಗಿ) ಇರುವದು ವಿಶೇಷವೆನಿಸುತ್ತದೆ. ಈ ವಿಗ್ರಹವನ್ನು ಬಹುವಿಶೇಷ ರೂಪವೆಂದು ಹೇಳಬಹುದು. ಕೌಮಾರಿದೇವಿ ಈ ರೀತಿ ಬಿಡಿಯಾಗಿ ಮತ್ತೆಲ್ಲಿಯೂ ಕೂಡಾ ಇದ್ದಂತೆ ತಿಳಿದು ಬಂದಿರುವುದಿಲ್ಲ, ಕಾರಣ ಈ ವಿಶೇಷವನ್ನು ಶ್ರೀಶೈಲ ಕ್ಷೇತ್ರಕ್ಕೆ ಮಾತ್ರವೆಂದು ಪ್ರತ್ಯೇಕವಾಗಿ ಹೇಳಬಹುದು.
ಹೀಗಿರಲು ವಸ್ತ್ರಾಲಂಕರಣದಿಂದ ಪೀಠದ ಮೇಲೆ ಆಸೀನಳಾದ ನವಿಲುವಾಹನದಿಂದ ಕಾಣುವ ಈ ದೇವಿ ಅರ್ಧಾಸನ ಭಂಗಿಮದಲ್ಲಿ ಎಡಗಾಲು ಮಡಚಿಕೊಂಡು ಸರ್ಪವನ್ನು ಬಾಯಲ್ಲಿ ಹಿಡಿದ ನವಿಲು ಮೇಲೆ ಬಲಗಾಲು ಇಟ್ಟಿರುವುದನ್ನು ಕಾಣಬಹುದು, ಈ ಅಮ್ಮನವರು ಕೇಶ ಬಂಧನದಿಂದ ಕೂಡಿದ ಶಿರಸ್ಸುಗಳುಳ್ಳ ಆರುಮುಖಗಳಿಂದ ಕಾಣುವಳು.
ಅಮ್ಮನವರು ತನ್ನ ಹನ್ನೆರಡು ಕೈಗಳಿಂದ ಬಲಗಡೆ ಕೆಳಗಿಂದ ಮೇಲಕ್ಕೆ ಕ್ರಮವಾಗಿ ಜಪಮಾಲಯುತ ಚಿನ್ನುದ್ರಾಶೂಲ, ಪರಶುವು, ಖಡ್ಗ, ಬಾಣ, ಶಕ್ತಿ, ಆಯುಧವನ್ನು ಹಾಗೆಯೇ ಎಡಭಾಗದ ಭುಜಗಳಲ್ಲಿ ತಾಳಪತ್ರಯುತ ವರಮುದ್ರೆ, ತ್ರಿಶೂಲ, ಅಂಕುಶ, ಡಾಲು, ಧನಸ್ಸು, ಶಕ್ತಿ, ಆಯುಧಗಳನ್ನು ಧರಿಸಿರುವಳು. ಅಮ್ಮನವರಿಗೆ ಕರ್ಣಾಭರಣಗಳು ವಿವಿಧ ಕಂಠಾಭರಣಗಳನ್ನು ಧರಿಸಿರುವುದನ್ನು ಕಾಣಬಹುದು. ಈ ಅಮ್ಮನವರನ್ನು ಘಂಟಾಮಠದಲ್ಲಿ ಎಂದು ಪ್ರತಿಷ್ಠಿಸಿರುವರೋ ಇಂದಿಗೂ ತಿಳಿಯದು.
ಬಹುಮಹಿಮೆಯುಳ್ಳ ಈ ಮೂರ್ತಿಭಕ್ತರು ಅರಿಕೆಗಳನ್ನು ತೀರಿಸುವಳೆಂದು ಭಕ್ತರ ನಂಬಿಕೆ. ಅದಕ್ಕಾಗಿಯೇ ಸದಾ ಎಲ್ಲ ರಾಷ್ಟ್ರಗಳಿಂದ ಭಕ್ತರು ಬಂದು ದೀಕ್ಷೆಯಿಂದ ಈ ಅಮ್ಮನವರನ್ನು ಉಪಾಸನೆಯಿಂದ ಪೂಜಿಸಿ, ಆರಾಧಿಸಿ, ತಮ್ಮ ತಮ್ಮ ಬನೋಬಯಕೆಗಳನ್ನು ಈಡೇರಿಸಿಕೋಳ್ಳುತ್ತಿರುವರು.
ಇನ್ನೂ ಕೆಲವರು ಮಾನಸಿಕ ಪ್ರಶಾಂತತೆಗಾಗಿ ಮತ್ತು ಆರೋಗ್ಯಕ್ಕಾಗಿ ಅಮ್ಮನವರನ್ನು ಧ್ಯಾನಿಸುತ್ತಿರುವರು. ಈ ಘಂಟಾಮಠವು ಹಿಂದಿನ ಕಾಲದಲ್ಲಿ ಸಿದ್ಧಪುರುಷರ ವಾಸಸ್ಥಾನವೆಂದು ಅದಕ್ಕೇ ಈ ಮಠದದಲ್ಲಿ ಮಾಡುವ, ಧ್ಯಾನ, ಜಪ, ಪಾರಾಯಣಗಳು ಬೇಗ ಸಿದ್ಧಸುವವೆಂದು ಭಕ್ತರ ನಂಬಿಕೆ.